ಇಂದು ಮುಧೋಳ TLC ಕೇಂದ್ರದಲ್ಲಿ ಮುಧೋಳ, ರಿಬ್ಬನಪಲ್ಲಿ,ಲಿಂಗಂಪಲ್ಲಿ,
ಮದನಾ ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗೆ ಸಮಾಲೋಚನೆ ಸಭೆ ಹಮ್ಮಿಕೊಳ್ಳಲಾಯಿತು.
*ಮೊದಲನೆ ಅವಧಿಯಲ್ಲಿ* ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಲಿಕಾ ಪ್ರಕ್ರಿಯೆ ಮಕ್ಕಳ ಭಾಗವಹಿಸುವಿಕೆ ಕುರಿತು ಅನುಭವ ಹಂಚಿಕೊಳ್ಳಲಾಯಿತು.
*ಎರಡನೆ ಅವಧಿಯಲ್ಲಿ*
ನಲಿಕಲಿ ಭಾಷೆ ನವೆಂಬರ್ ತಿಂಗಳಲ್ಲಿ ಬರುವ ಮೈಲುಗಲ್ಲುಗಳು ಮತ್ತು ಚಟುವಟಿಕೆಗಳು ಕಲಿಕಾ ಚೇತರಿಕೆ ಅಭ್ಯಾಸ ಪುಸ್ತಕದ ಬಳಕೆ ಮಾರ್ಪಡಿಸಿದ ಪ್ರಗತಿನೋಟಗಳ ಪರಿಚಯ ಮಾಡಿಸಲಾಯಿತು.
*ಮೂರನೆ ಅವಧಿಯಲ್ಲಿ*
ನವೆಂಬರ್ ತಿಂಗಳ ಗಣಿತ ಚಟುವಟಿಕೆಗಳು ಕಲಿಕಾ ಹಾಳೆಗಳ ಬಳಕೆ ಪ್ರಗತಿನೋಟಗಳ ಪರಿಚಯ ಕಲಿಕಾ ಸಾಮಾಗ್ರಿಗಳನ್ನು ಬಳಸಿಕೊಂಡು ಸ್ಥಾನ ಬೆಲೆ ,ದಶಕ ಸಹಿತ,ದಶಕ ರಹಿತ,ಸಂಕಲನ ,ವ್ಯವಕಲನ,ಮಿಶ್ರಕ್ರಿಯೆ,
ಸಮಯದ ಕಲ್ಪನೆ,ಚಟುವಟಿಕೆಗಳನ್ನು ಸುಗಮಕಾರರಿಗೆ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾಡಿಸಲಾಯಿತು.
*ನಾಲ್ಕನೆ ಅವಧಿಯಲ್ಲಿ*
Enk ಮತ್ತು ಪರಿಸರ ಅಧ್ಯಯನದ ಚಟುವಟಿಕೆಗಳ ಪರಿಚಯ ಮಾಡಿಕೊಡಲಾಯಿತು.
ಹಾಗೂ ನಲಿಕಲಿಯಲ್ಲಿ
ಮೌಲ್ಯಮಾಪನ ರೂಪಣಾತ್ಮಕ 1,2 ಮತ್ತು *ನಲಿಕಲಿಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ* ಕುರಿತು ಚರ್ಚೀಸಲಾಯಿತು.
*ಸಮಾಲೋಚನೆ ಸಭೆಗೆ ಕ್ಷೇತ್ರ ಸಮನ್ವಯಾಧೀಕಾರಿಗಳಾ ಶ್ರೀ ಶಂಕರಲಿಂಗಪ್ಪ ಸರ್ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು*.
ನಲಿಕಲಿ ನೋಡಲ್ ಅಧಿಕಾರಿಗಳು ಬಿ.ಆರ್.ಪಿ.
೪ ಕ್ಲಸ್ಟರ್ ಗಳ
ಸಿ ಆರ್.ಪಿ.ಯವರು ಅಜೀಂ ಪ್ರೇಮಜಿ ಫೌಂಡೇಶನ್ ಸಂಯೋಜಕರು ಉಪಸ್ಥಿತರಿದ್ದರು.
ಚಟುವಟಿಕೆಗಳಲ್ಲಿ
ಸುಗಮಕಾರರ ಭಾಗವಹಿಸುವಿಕೆ ತುಂಬಾ ಚೆನ್ನಾಗಿತ್ತು.
*ಎಲ್ಲರ ಸಹಕಾರದಿಂದ ಸಮಾಲೋಚನೆ ಸಭೆ ಯಶಸ್ವಿಯಾಗಿ ನಡೆಯಿತು*.
















































































No comments:
Post a Comment