ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕದಲಾಪೂರ ಹಾಗೂ ಅಜೀಮ್ ಪ್ರೇಮ ಜಿ ಫೌಂಡೇಶನ್ ಸೇಡಂ ರವರ ಸಹಯೋಗದಲ್ಲಿ ಶ್ರೀ ಶರಣ ಕುಮಾರ ಸಲಗರೆ ಸಂಯೋಜಕರು TLC ಮುಧೋಳ ರವರ ಸಹಕಾರದಿಂದ ಇಂದು ನಮ್ಮ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಶಾಲೆಯ ಗೇಟ್ ಮುಂದಿನ ಚರಂಡಿ ದಾಟಿ ಮಕ್ಕಳು ಸುಲಭವಾಗಿ ನಡೆದು ಶಾಲೆಗೆ ಬರಲು ಮತ್ತು ಹೋಗಲು ಪರಿಸಿ ಹಾಕಲಾಯಿತು ತಾಲೂಕು ಹಂತದ ಅಧಿಕಾರಿಗಳು ನಮ್ಮ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕೆಲಸ ಮಾಡಲು ಸೂಚಿಸಿದರು ಕೂಡ ಕೆಲಸ ಆಗಿರಲಿಲ್ಲ ಇಂದು ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಈ ಕೆಲಸ ಸಾಧ್ಯವಾಯಿತು.
ಇಂದು ನಡೆದಂತಹ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನಮ್ಮ ಶಾಲೆಯಲ್ಲಿ ನಡೆದ ಶ್ರಮದಾನ ಅವಿಸ್ಮರಣೆಯವಾದ ದಿನವಾಗಿತ್ತು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ಕಾರ್ಯನಿರ್ವಹಿಸಿದ ಎಲ್ಲ ಹಿರಿಯ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ವಂದನೆಗಳು ಹಾಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಶ್ರೀ ಶರಣ ಕುಮಾರ ಸಲಗರೆ ಸರ್ ರವರಿಗೆ ಅನಂತ ವಂದನೆಗಳು, ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ನಮ್ಮ ಶಾಲೆಗೆ ನನಗೆ ಸದಾ ಹೀಗೆ ಇರಲಿ.💐💐🙏🙏
















































No comments:
Post a Comment